Showing posts with label kannada. Show all posts
Showing posts with label kannada. Show all posts

Tuesday, 16 August 2011

ಸಮಾನತೆಯ ಆಸೆ


ಜಗಕೆ ಅರಿವೆಂಬ ಮಳೆಸುರಿದು
ಜನರ ಮಸ್ತಕದಿ ಜಿನುಗಲಿ
ಅಸಮಾನತೆಯ ಕಳೆ ತೆಗೆದು
ಸಮಾನತೆಯ ಬೆಳೆ ಬೆಳೆಯಲಿ ||

ಅತಿವೃಷ್ಟಿ ಯಾಗಿ ಅಂತಸ್ತು ಕರಗಿ
ನಗನಾಣ್ಯವೆಲ್ಲ ಹರಿದಂಚಿ ಹೋಗಿ
ಬರಡಾದ ಬಡವನಂಗಳದಿ
ಸಿರಿತನದ ಮೊಳಕೆ ಹೊಡೆಯಲಿ ||

ಜಾತಿಬೇದವು ನೆರೆಯಲ್ಲಿ ಮುಳುಗಿ
ಮೂಢಾಚಾರವು ನೀರಲ್ಲಿ ಕರಗಿ
ರಸಋಷಿಯ ವಿಶ್ವಮಾನವ ಕನಸು
ಇಂದಿಗಾದರು ನನಸಾಗಲಿ ||

                                ಆರ್. ಆರ್. ಅಶಾಪುರ್