Monday 26 September 2011

ಬಿಡುವು ಕೊಡದೆ ಕಾಡಿದೆ.

ನಿನ್ನ ಬಳೆಯ ನಾದಕೆ
ಮನಸು ತಾಳ ಹಾಕಿದೆ
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ
ಹೃದಯ ಹೆಜ್ಜೆ ಹಾಕಿದೆ

ತುಟಿ ಅಂಚಿನ ಮುಗುಳ್ನಗೆ
ಕಣ್ಣ  ತುಂಬಾ ತುಂಬಿದೆ
ನಿನ್ನ ಮಧುರ ದ್ವನಿ ಅದು
ಕಿವಿಯ ಒಳಗೆ ಗುನುಗಿದೆ

ಊಟ ನನ್ನ ಮೇಲೆ ಮುನಿದು
ನಿದುರೆ ದೂರ ತಳ್ಳಿದೆ
ಹಗಲು ಇರುಳು ನಿನ್ನ ನೆನಪು
ಬಿಡುವು ಕೊಡದೆ ಕಾಡಿದೆ.
                            ಆರ್.ಆರ್.ಆಶಾಪುರ್

Tuesday 20 September 2011

ಹೇಗೆ ಬುದ್ದಿ ಹೇಳಲಿ ?

ವಯಸು ಹದಿನಾರಾಗಿದೆ,ಹರೆಯ ಬಂದು ಕಾಡಿದೆ
ನನ್ನ ಮಾತೇ ಕೇಳದೆ ಮನಸು ಹಿಡಿತ ತಪ್ಪಿದೆ
ಅಂಕೆ ಇರದ  ಅಶ್ವಕೆ ಹೇಗೆ ಕಡಿವಾಣ ಹಾಕಲಿ
ನನ್ನೇ ಮರೆತ ಮನಸಿಗೆ ಹೇಗೆ ಬುದ್ದಿ ಹೇಳಲಿ

ದಿನವು ಪೇಟೆ ಬೀದಿಲಿ ನನ್ನ ದಾರಿ ಕಾಯುವ
ನನ್ನ ಬೆನ್ನ ಹಿಂದೆಯೇ ಕದ್ದು ಮುಚ್ಚಿ ಬರುತಿಹ
ಅವನೆಡೆ ಮನಸು  ಜಾರಿದೆ ನನಗೆ ಸುಳಿವೇ ನೀಡದೆ

ಶಾಲೆ ಬಿಡುವ ಸಮಯಕೆ ಗೇಟಿನಲ್ಲಿ ನಿಂತಿರೋ
ದೊಡ್ಡ ಗುಂಪಿನಲ್ಲಿಯು ನನ್ನೇ ಹುಡುಕಿ ನೋಡಿರೋ
ಅವನೆಡೆ ಸಾಗಿದೆ ಮನಸು ಹಿಂದೆ ತಿರುಗಿ ನೋಡದೆ

ನನ್ನ ಮಾತೇ ಕೇಳದೆ ಮನಸು ಹಿಡಿತ ತಪ್ಪಿದೆ
ನನ್ನೇ ಮರೆತ ಮನಸಿಗೆ ಹೇಗೆ ಬುದ್ದಿ ಹೇಳಲಿ
                                 ಆರ್. ಆರ್. ಅಶಾಪುರ್

Monday 12 September 2011

ನೆನಪು

ಕಷ್ಟಗಳನ್ನೆದುರಿಸಿ ನೊಂದ  ದಿನಗಳ
ನೋವು ತುಂಬಿದ ಘಟನೆಗಳ
ಮಾಸಿಹೋದ ಗಾಯಗಳ
ಕೆದುಕಿ ನೋಯಿಸುವುದು ನೆನಪು

ಕಳೆದು ಹೋದ  ಸಂಬ್ರಮದ ಕ್ಷಣಗಳ
ಉಲ್ಲಾಸವ ತಂದ ವಿಷಯಗಳ
ಮರೆಯಾದ ಮಂದಹಾಸಗಳ
ಪುನಹ ಹೊತ್ತುತರುವುದು ನೆನಪು

ಗತಕಾಲದ ನೋವುನಲಿವಿನ ಸಂಗತಿಗಳ
ಕ್ಷಣಾರ್ದದಲಿ  ಕಣ್ಣೆದುರು ತಂದಿಟ್ಟು
ವರ್ತಮಾನದಿಂದ ಬದಿಗೊತ್ತಿ ನಮ್ಮನು
ಭೂತಕಾಲಕ್ಕೆ ಕರೆದೊಯ್ಯುವುದು ನೆನಪು
                 
                                ಆರ್. ಆರ್. ಅಶಾಪುರ್

Friday 9 September 2011

ನೆಮ್ದಿ ಕೊಡೋರ್ ಯಾರು ?

ದುಡ್ಡು ಐತೆ ಬಂಗ್ಲೆ ಐತೆ ಓಡಾಡೋಕೆ ಕಾರು
ಇಷ್ಟೆಲ್ಲಿದ್ರು ನಿನ್ ಮನ್ಸಿಗ್  ನೆಮ್ದಿ ಕೊಡೋರ್ ಯಾರು ?

ಭಂದ್ಗುಳ್ ಎದ್ರಿಗ್ ಬಂದ್ರೆ ಮಾತಾಡ್ತಾರ್ ಹಲ್ಲು ಕಿರ್ದು
ಮುಂದುಕ್ ಹೊದ್ಮೆಲ್ ಬೈಕೊತಾರ್ ಬಿನ್ನಿಗ್ ತಿವ್ದು ತಿವ್ದು
ಹಬ್ಬ ಔತ್ಣ ಏನೇ ಇರ್ಲಿ ಬರ್ತಾರ್ ರೆಡಿಯಾಗಿ
ಕಷ್ಟದಲ್ಲಿ ಸಹಾಯ ಕೇಳಿದ್ರೆ  ಅಂತಾರ್  ದೂರ ಹೋಗಿ

ಸ್ನೇಹಿತ್ರೆಲ್ಲ ಜೊತೆಗೆ ಅನ್ನೋದ್ ಓದೋವರ್ಗು ಅಷ್ಟೇ
ಕೆಲ್ಸಾ ಸಿಕ್ಮೆಲ್  ದೂರಾಗ್ಬೇಕು ಈ ದುನಿಯಾದ ಕಥೆ ಇಷ್ಟೇ
ಭೂಮಿಮೇಲೆ ಒಳ್ಳೆ ದೊಸ್ತ್ರು ಸಿಗೋದ್ ಕಷ್ಟ ತಮ್ಮ
ಸಿಕ್ರುನೂವೆ ಜೊತೇಲ್ ಇರೊಂಗ್ ಬರಿಯಲ್ಲ ಆ ಬ್ರಮ್ಮ

ತಂದೆ ತಾಯಿ ಪ್ರೀತಿಯಲ್ಲ ಮದ್ವೆ ಆಗೋ ಗಂಟ
ಮದ್ವೆ ಆದ್ಮೇಲ್ ಅಂತಿರ್ತಾರೆ ಮಗ ಬದ್ಲಾಗ್ಬಿಟ್ಟ
ಹೆಂಡ್ತಿ ಪರ್ವಾಗ್ ಮಾತಾಡಿದ್ರೆ ಇವ್ರಿಗ್ ಹಿಡ್ಸಕಿಲ್ಲ
ಹಂಗಂತೇಳಿ ಅವ್ರ್ಕಡೆ ಹೋದ್ರೆ ಇವ್ಳು ಸುಮ್ನಿರಾಕಿಲ್ಲ

ಹಿಂಗಿರ್ವಾಗ ನೆಮ್ದಿಯಿಂದ ಹೆಂಗಿರ್ತೈತಿ ಬಾಳು
ನೆಮ್ದಿ ಇಲ್ದೆ ಕಾರು ಬಂಗ್ಲೆ ಇಟ್ಗಂಡ್ ಏನ್ ಮಾಡ್ತಿ ಹೇಳು
ಕಾಲಕ್ ತಕ್ಕಂಗ್ ನಡಿಲೇಬೇಕು ಅನ್ನೋ ಮಾತು ನಿಜ
ಸಂಭಾದನ್ನೋ ಕಾಲು ಮುರುದ್ರೆ ನಡಿಯೋದೆಂಗೆ ಮನುಜ ?

                                             ಆರ್. ಆರ್. ಅಶಾಪುರ್

 (ಆಡು ಭಾಷೆಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ )

Wednesday 7 September 2011

ಕಣ್ಣೋಟ

ನನ್ನ ಮನದಲಿ ಮನೆ ಮಾಡಿದೆ
ಮನೆಗೆ ನಂದಾದೀಪವಾದೆ
ನಿನ್ನ ಒಂದೇ ನೋಟದಲಿ

ಪ್ರೇಮ ವಿಜ್ಞಾಪನೆಗೆಂದು
ನಿಂತೇ ನಿನ್ನೆದುರು ಬಂದು
ಭಯದಿ ಮಾತೆಲ್ಲ ಮರೆತು
ನಿನ್ನ ಮೋಹಕ ಕಣ್ಣೋಟಕೆ ನಾನು ಸೋತು
ಎಲ್ಲೋ ಕಳೆದ್ಹೋದೆ ನನ್ನ ನಾ ಮರೆತು

ನಾನು ನಿನ್ನೆದುರು ಬಂದು
ಮನದಾಸೆ ಹೇಳಲಾಗದೆಂದು
ತಂದಿರುವೆ ಕಣ್ಣಂಚಲ್ಲಿ  ಬರೆದು
ನೀ ಓದುವವರೆಗೂ ರೆಪ್ಪೆ ಮಿಟುಕಿಸೆನು ಈಗ
ಓದಿ ಕಂಗಳಿಗೆ ವಿಶ್ರಾಂತಿ ನೀಡು ಬೇಗ 
                                        
                                        ಆರ್. ಆರ್. ಅಶಾಪುರ್