Saturday 29 September 2012

ವಿವೇಕ ದೀಪ

ಪರರ ಹೆಗಲ ಭಾರವನು
ಹೋರಲು ಹೆಗಲೊಡ್ಡಿ ನಿಂತಿಹೆವು
ಪರರ ಕಷ್ಟಕ್ಕೆ ಸ್ಪಂದಿಸಲು
ಪಣತೊಟ್ಟು  ನಿಂತಿಹೆವು

ವಿದ್ಯಾವಂತರ ಸೃಷ್ಟಿಯಿಂದಲೇ
ದೇಶದ ಏಳಿಗೆ ಎಂದು ನಂಬಿಹೆವು
ವಿದ್ಯಾವಂಚಿತರಿಗೆ ವಿದ್ಯೆ ಒದಗಿಸಲು
ನಮ್ಮ ಮೊದಲ ಹೆಜ್ಜೆ ಹಾಕಿಹೆವು

ನಮ್ಮ ಈ ಕಾರ್ಯದ ಯಶಸಿಗ್ಗೆ
ದೈವ ನಮ್ಮನ್ನು ಹರಸಲಿ
ನಾವಲ್ಲ ಹಚ್ಚಿರುವ ವಿವೇಕ ದೀಪ
ನಂದಾದೀಪ ವಾಗಲಿ
                           ಆರ್ ಆರ್ ಅಶಾಪುರ್