ಸುಳ್ಳು ದ್ರವರೂಪಿ
ಸ್ಥಳ, ಪರಿಸ್ಥಿತಿಗೆ ತಕ್ಕಂತೆ
ಹೊಂದಿ ಕೊಳ್ಳುವುದು.
ಸತ್ಯ ಘನರೂಪಿ
ಯಾವುದೇ ಸ್ತಳ ಪರಿಸ್ಥಿತಿ ಯಲ್ಲೂ
ಬದಲಾಗುವುದಿಲ್ಲ.
ಸುಳ್ಳಿಗೆ ಅನೇಕಮುಖ
ಸತ್ಯಕ್ಕೆ ಒಂದೆ ಮುಖ
ಆರ್.ಆರ್.ಆಶಾಪುರ್
ಜೀವನ ಕಡಲಲ್ಲಿ
ಸ್ವಚಂದವಾಗಿ ಈಜುತಿದ್ದ
ಮೀನು ನಾನು,
ಪ್ರೀತಿ ಬಲೆಯಲ್ಲಿ ಬಂದಿಸಿದೆ ನೀನು,
ಜೀವ ಹೋಗುವ ಸೂಚನೆ ಇದ್ದರೂ
ಬಲೆಯ ಮೋಹಕ್ಕೆ ಸಿಲುಕಿ
ಗುರುತಿಸದಾದೆ.
ಬಲೆ ಇಂದ ಹೊರ ಹಾಕಿ ನಡೆದಿರುವೆ
ಇಂದು ನೀನು,
ಬಲೆಯ ನೆನಪಿನಲ್ಲೆ
ಕೊರಗುತಿರುವೆ ನಾನು
ಬಲೆಯನ್ನು ಮರೆಯಲಾರದೆ
ಮೊದಲಿನಂತೆ ಈಜಲಾರದೆ.
ಆರ್.ಆರ್.ಆಶಾಪುರ್