Friday 31 August 2012

ನಮ್ಮ ಕನ್ನಡ

ನುಡಿದರೆ ನಾಲಿಗೆಯ
ಪಾಪ ಕಳೆದಂತೆ
ಆಲಿಸಿದರೆ ಕರ್ಣಗಳಿಗೆ
ಪುಣ್ಯ   ದೊರೆತಂತೆ
ಬರೆದರೆ  ಹಸ್ತಕ್ಕೆ 
ಬಲವು  ಬಂದಂತೆ
ಕರುನಾಡಲ್ಲಿ  ಇದ್ದರೆ 
ಸ್ವರ್ಗದಲಿ  ನಿಂತಂತೆ
ಅನ್ಯ  ಭಾಷೆಯ
ಮೋಹಕ್ಕೆ ಸಿಲುಕಿ
ಕನ್ನಡವ ಮರೆಯುವಿರಲ್ಲ
ಏನಿಹುದು ಅವಕೆ?
ವಿಶ್ವದ ಪುರಾತನ
ಭಾಷೆ ಎಂಬ ಹೆಗ್ಗಳಿಕೆ ಕನ್ನಡಕೆ,
ಕನಕದಾಸ ,ಪುರಂದರ ದಾಸರಂತ
ದಾಸ  ಶ್ರೇಷ್ಠರ ಇತಿಹಾಸ ಕನ್ನಡಕೆ ,
ಬಸವಣ್ಣ, ಅಕ್ಕಮ್ಮ ,
ಜೇಡರ
ದಾಸೀಮಯ್ಯ ,
ಅಂಬಿಗರ ಚೌಡಯ್ಯರಂತ
ವಚನಕಾರರ ಹಾರೈಕ ಕನ್ನಡಕೆ,
ತಾಯ್ನುಡಿ ಬೇರೆಯಾದರು,
ಕನ್ನಡದಿ ಬರೆದು ಜ್ಞಾನಪೀಠ ಪಡೆದ
ಕವಿವರ್ಯರ ಬೆಂಬಲವು ಕನ್ನಡಕೆ ,
ಅತಿ ಹೆಚ್ಚು ಜ್ಞಾನಪೀಠ ಪಡೆದ
ದಾಖಲೆಯು ಕನ್ನಡಕೆ , 
ಏನ್ ಹೇಳಲಿ  ಇಂತ ನುಡಿಯ
ಮರೆಯಲೊರಟ ನಿಮ್ಮ
ಸಣ್ ತನಕೆ .
ಎಷ್ಟು ಭಾಷೆಗಳ
ಕಲಿತರೂ ಕೂಡ
ನಮ್ಮ ಕನ್ನಡವ ಮರೆಯುವುದು ಬೇಡ.

                                                ಆರ್.ಆರ್.ಆಶಾಪುರ್