Saturday 31 March 2012

ಮತದಾನ

ಸಾರಾಯಿ ಪಡೆದ ಋಣ ದಿಂದ
ಒಟ್ ಹಾಕಿ ಮುಕ್ತಗೊಂಡೆ
ನೀರು ಬರದೆ ವರುಷವಾಯ್ತು
ದನಿಯೆತ್ತಿ ಕೇಳೋ
ಅಧಿಕಾರ  ಕಳೆದುಕೊಂಡೆ

ಬಿರಿಯಾನಿ ಪೊಟ್ಟಣವ ಕೊಟ್ಟವಗೆ
ಮತ ಒತ್ತಿ ನೀಯತ್ತು ತೋರಿಸಿದೆ
ತುತ್ತು ಅನ್ನ ಸಂಪಾದನೆ
ಕಷ್ಟವಾಗಿದೆ ಇಂದು
ಕಷ್ಟ ಕೇಳುವ ಕಿವಿ ಕಿವುಡಾಗಿವೆ

ಮನೆಬಾಗಿಲಿಗೆ ಬಂದು ಕೈ ಮುಗಿದು
ಕಾಲು ಹಿಡಿದವಗೆ ಮತ ದಾನ ಮಾಡಿ
ಸಹಾನುಭೂತಿ ತೋರಿಸಿದೆ
ಈಗ ಭೂತವಾಗಿ ಕಾಡಿಹನು
ಎದುರಿಸಿ ನಿಲ್ಲುವ ಶಕ್ತಿ ಕಳೆದುಕೊಂಡೆ

ಕಂಡಕಂಡಲ್ಲಿ ತಿಂದು ಕುಡಿದು
ಬಂದೆ ಕಂಡವರಿಗೆ ಮತ ಹಾಕಿ
ನಿತ್ಯದ ಅವಶ್ಯಕತೆಗಳ
ಕಾಣದೆ ಬದುಕಿರುವೆ
ಬಾಯಲ್ಲಿ ಮಣ್ಣು ಬಿಳುವುದೊಂದೇ ಬಾಕಿ
                                        ಆರ್ ಆರ್ ಆಶಾಪುರ್

1 comment:

  1. Trikaala satya. idannu jana ariyuvude nijavadare nijakku desha uddharavaguvudu. very good try Rakesh. ninna kavanagalu kalpanikavagiruvudilla. 100% vastavikathe irutte. Proud of u. Keep it up.

    ReplyDelete