Monday 22 August 2011

ಸ್ವತಂತ್ರ ಭಾರತ

ಸ್ವತಂತ್ರ ಭಾರತಕ್ಕೆ ಅರವತ್ನಾಲ್ಕು ವರುಷ
ಇನ್ನೂ ಬಿಸಿಲು ಕುದುರೆಯಂತಿದೆ  ಜನರ ಬದುಕಲ್ಲಿ ಹರುಷ |

ನಾಯಕರ ಹುಸಿ ಭರವಸೆ ಯಿಂದ ದುಃಖ ಅತಿಯಾಗಿದೆ 
ಸಮುದ್ರದಂತ ಪ್ರತಿ ಕಣ್ಣಲ್ಲಿ ಕಣ್ಣೀರೆ ಅಲೆಯಾಗಿದೆ
ದುಷ್ಟ ನಾಯಕರು ಕೊಚ್ಚಿಹೋಗುವಂತೆ
ಸಮುದ್ರದಾಳದಿಂದ ಸುನಾಮಿ ಹೊರಬೀಳಬೇಕಿದೆ ||

ದೇಶದೆಲ್ಲೆಡೆ ಬ್ರಷ್ಟತೆಯ ಕಂಡು ಮನಗಳು  ನೊಂದಿವೆ 
ಬೆಂಕಿಉಂಡೆಯಂತ ಮನಗಳಲ್ಲಿ  ನಿಟ್ಟುಸಿರೆ ಜ್ವಾಲೆ ಯಾಗಿದೆ
ಬ್ರಷ್ಟ ನಾಯಕರು ಸುಟ್ಟು ಹೋಗುವಂತೆ
ಜ್ವಾಲೆ ಜ್ವಾಲೆಯಿಂದ ಬೆಂಕಿ ಮಳೆ ಸುರಿಯಬೇಕಿದೆ  ||
                                   
                                       ಆರ್ ಆರ್ ಆಶಾಪುರ್

No comments:

Post a Comment