Friday 26 August 2011

ಇಂದಾದರು ನೀನು ಬರಬಾರದೇನು

ಬೆಳದಿಂಗಳ ಬಾನಲ್ಲಿ ಕಂಡ ಚಂದ್ರ ಮುಖಿ
ಕನಸಲ್ಲಿ ನಗುತ ಕಾಡುವ ಹಸನ್ಮುಖಿ
ಕಣ್ಣೆದುರು ಎಂದು ಬರುವೆ ನನ್ನ ಪ್ರಾಣ ಸಖಿ

ಸೂರ್ಯ ಮುಳುಗುವ ಹೊತ್ತು
ಇಬ್ಬರು ಜೊತೆಯಾಗಿ ಕೂತು
ಆಡೋಣ ನೂರೆಂಟು ಮಾತು
ಎಂದು ಕನಸಲ್ಲಿ ನೀ ನನಗಿತ್ತ ಮಾತು
ನಂಬಿ ನಿನ್ನ ದಾರಿ ಕಾದಿರುವೆ ನಾನು
ಇಂದಾದರು ನೀನು ಬರಬಾರದೇನು

ಮಳೆ ಸುರಿಯುವ ಸಮಯ
ನಾ ಬಂದು ನಿನ್ನ  ಸನಿಹ
ತಿಳಿಸುವೆ ಮನದ ಬಯಕೆಯ
ಎಂದು ಕನಸಲ್ಲಿ ನೀ ಕೊಟ್ಟ ಭಾಷೆಯ
ನಂಬಿ ನಿನ್ನ ದಾರಿ ಕಾದಿರುವೆ ನಾನು
ಇಂದಾದರು ನೀನು ಬರಬಾರದೇನು

                                         ಆರ್. ಆರ್. ಅಶಾಪುರ್

2 comments:

  1. Ashapur ravare, kavithe thumba chennagide. olleya saalugalu. E saalugalannu uttama chitrakke alavadisikondare. chennagiruttade allave.Vandanegalodane.

    ReplyDelete
  2. ವೇದ ಅವರೇ ತುಂಬು ಹೃದಯದ ಧನ್ಯವಾದಗಳು .

    ReplyDelete